ಶುಕ್ರವಾರ, ಡಿಸೆಂಬರ್ 30, 2011

Worth spending some time to read this...

Friends I Just got this article as a fwd mail.Really touching story .:( So posted here.Must read it.


ಬೆಂಗಳೂರಿನಲ್ಲಿ ಇರುವ ಜನಕ್ಕೆ ಕತ್ರಿಗುಪ್ಪೆ ಚೆನ್ನಾಗಿ ಗೊತ್ತು. ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ ಇಳಿದು, ಫುಡ್‌ವರ್ಲ್ಡ್ ದಾಟಿದ್ರೆ ಸಿಗೋದೇ ಅನ್ನ ಕುಟೀರ ಹೋಟೆಲು. ಅದರ ಎದುರಿಗೆ ಬಿಗ್‌ಬಜಾರ್. ಅದೇ ರಸ್ತೇಲಿ ಮುಂದೆ ಹೋಗಿ ಮೊದಲು ಎಡಕ್ಕೆ ತಿರುಗಬೇಕು. ಹಾಗೇ ಐದು ನಿಮಿಷ ನಡೆದರೆ ಎರಡು ಸಂಪಿಗೆ ಮರಗಳು ಸಿಗುತ್ತವೆ. ಆ ಮರದ ಎದುರಿಗಿರೋದೇ ಹರೀಶ-ಭಾರತಿ ದಂಪತಿಯ ಮನೆ. ಡಬಲ್ ಬೆಡ್‌ರೂಂನ ಆ ಮನೆಗೆ ಎರಡು ಲಕ್ಷ ಅಡ್ವಾನ್ಸ್. ಎಂಟು ಸಾವಿರ ಬಾಡಿಗೆ.

ಭಾರತಿ-ಹರೀಶ್ ದಂಪತಿಗೆ ಒಂದು ಮುದ್ದಾದ ಮಗುವಿದೆ. ಅದರ ಹೆಸರು ಸ್ನೇಹಾ. ಹರೀಶನಿಗೆ ಒಂದು ಎಂಎನ್‌ಸಿಯಲ್ಲಿ ಕೆಲಸವಿದೆ. ಎಂಎನ್‌ಸಿ ಕೆಲಸ ಅಂದ ಮೇಲೆ ಹೇಳೋದೇನಿದೆ
? ಆ ನೌಕರಿಯಲ್ಲಿ ಒಳ್ಳೆಯ ಸಂಬಳವೇನೋ ಇದೆ ನಿಜ. ಆದರೆ ಆ ದುಡಿಮೆಗೆ ಹೊತ್ತು-ಗೊತ್ತು ಎಂಬುದೇ ಇಲ್ಲ. ಶಿಫ್ಟ್ ಲಿಸ್ಟಿನ ಪ್ರಕಾರ ಬೆಳಗ್ಗೆ 11ರಿಂದ ಸಂಜೆ ಆರೂವರೆಯವರೆಗೂ ಕೆಲಸ ಅಂತ ಇದೆ ನಿಜ. ಆದರೆ ಹೆಚ್ಚಿನ ದಿನಗಳಲ್ಲಿ ಕೆಲಸ ಮುಗಿಯೋವಷ್ಟರಲ್ಲಿ ರಾತ್ರಿ ಎಂಟು ಗಂಟೆ ದಾಟಿರುತ್ತೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಆಫೀಸಿಂದ ಹೊರಟು ಹರೀಶ ಕತ್ರಿಗುಪ್ಪೆಯ ಮನೆ ತಲುಪಿಕೊಳ್ಳುವುದರೊಳಗೆ ರಾತ್ರಿ ಒಂಭತ್ತೂವರೆ ಆಗಿಬಿಡುತ್ತಿತ್ತು. ಶನಿವಾರ-ಭಾನುವಾರಗಳಂದು ಆಫೀಸಿನ ಗೆಳೆಯರೊಂದಿಗೆ ವೀಕೆಂಡ್ ಪಾರ್ಟಿಗೆಂದು ಆತ ಹಾರಿಬಿಡುತ್ತಿದ್ದ. ಆ ಎರಡು ದಿನಗಳಲ್ಲಿ ಆತ ಮನೆ ತಲುಪುತ್ತಿದ್ದುದು ರಾತ್ರಿ ಹನ್ನೊಂದು, ಹನ್ನೊಂದೂವರೆಗೆ!

ಬೆಳಗ್ಗೆ ಒಂಭತ್ತು ಗಂಟೆಗೆಲ್ಲ ಗಂಡ-ಮಗಳು ಮನೆಯಿಂದ ಹೊರಟುಬಿಡುತ್ತಿದ್ದರು. ಆನಂತರ ಇಡೀ ದಿನ ಮನೇಲಿ ನಾನೊಬ್ಬಳೇ ಎನ್ನಿಸಿದಾಗ ಭಾರತಿಗೆ ಬೋರ್ ಎನ್ನಿಸತೊಡಗಿತು. ಅವಳಾದರೂ ಇಂಗ್ಲಿಷಿನಲ್ಲಿ ಎಂ.ಎ. ಮಾಡಿಕೊಂಡಿದ್ದವಳು. ಇಡೀ ದಿನ ಮನೇಲಿರುವ ಬದಲು ಯಾವುದಾದರೂ ಸ್ಕೂಲ್‌ನಲ್ಲಿ ಟೀಚರ್ ಆಗಿ ಸೇರಬಾರದೇಕೆ ಅಂದುಕೊಂಡಳು. ಅವಳ ಅದೃಷ್ಟಕ್ಕೆ
, ಅದೇ ವೇಳೆಗೆ ಸ್ನೇಹಾ ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕಿಯರ ಕೊರತೆ ಇದೆ ಎಂಬ ವಿಷಯವೂ ಗೊತ್ತಾಯಿತು. ಒಮ್ಮೆ ಪ್ರಯತ್ನಿಸಿ ನೋಡೋಣ. ಕೆಲಸ ಸಿಕ್ಕಿಬಿಟ್ಟರೆ ಹೋಗೋದು. ಇಲ್ಲವಾದರೆ, ಒಂದು ಸಂದರ್ಶನ ಎದುರಿಸಿದ ಅನುಭವವಂತೂ ಆಗುತ್ತದೆ ಎಂದುಕೊಂಡು ಅರ್ಜಿ ಹಾಕಿಯೇಬಿಟ್ಟಳು ಭಾರತಿ. ಹದಿನೈದೇ ದಿನಗಳಲ್ಲಿ ಆ ಕಡೆಯಿಂದ ಉತ್ತರ ಬಂತು : `ಸಹ ಶಿಕ್ಷಕಿಯಾಗಿ ನಿಮ್ಮನ್ನು ನೌಕರಿಗೆ ತೆಗೆದುಕೊಳ್ಳಲಾಗಿದೆ. ಅಭಿನಂದನೆ...'

ಹೆಂಡತಿ ಕೆಲಸಕ್ಕೆ ಹೊರಟು ನಿಂತಾಗ ಹರೀಶ ಎಗರಾಡಿದ. ತಕ್ಷಣವೇ ಭಾರತಿ ಹೇಳಿದಳು :
`ಯೋಚನೆ ಮಾಡಿ ಹರೀ. ಬೆಳಗ್ಗಿಂದ ಸಂಜೆಯ ತನಕ ಮನೇಲಿ ನಾನೊಬ್ಳೇ ಇರಬೇಕು. ಅದರ ಬದಲು ಟೀಚರ್ ಆಗಿ ಕೆಲಸ ಮಾಡಿದ್ರೆ ತಪ್ಪೇನು? ನಾನು ಹೋಗ್ತಿರೋದು ಮಗು ಓದ್ತಾ ಇರೋ ಸ್ಕೂಲೇ ತಾನೆ? ಇದರಿಂದ ಅವಳಿಗೂ ಒಂದು ಕಂಫರ್ಟ್ ಸಿಕ್ಕ ಹಾಗಾಯ್ತು. ಇನ್ನು ಮುಂದೆ ಪ್ರತಿ ತಿಂಗಳೂ ನಾನೂ ಒಂದಿಷ್ಟು ದುಡ್ಡು ಉಳಿಸ್ತೀನಿ. ಒಂದೈದು ವರ್ಷ ನಾವಿಬ್ರೂ ಕಷ್ಟಪಟ್ಟು ಎಷ್ಟು ಸಾಧ್ಯವೋ ಅಷ್ಟು ಉಳಿಸೋಣ. ಎಲ್ಲವನ್ನೂ ಮರೆತು ದುಡಿಯೋಣ. ಹಾಗೆ ಮಾಡಿದ್ರೆ ಆರನೇ ವರ್ಷದ ಹೊತ್ತಿಗೆ ನಾವೂ ಒಂದು ಸ್ವಂತ ಮನೆ ಮಾಡ್ಕೋಬಹುದೋ ಏನೋ...

ಶನಿವಾರ, ಡಿಸೆಂಬರ್ 24, 2011

ಗೆಳೆತನ


ಮೊದಮೊದಲು ಕೇಳಿದ ಆ ದ್ವನಿಯು ಮೀಟೀತು ನನ್ನೆದೆಯಲಿ ,
ಸಹಜವಾಗೇ ಸ್ಪಂದಿಸಿತು ನನ್ನೀ ಮನಸ್ಸು ನಿನ್ನೆಡೆಯಲಿ,
ಮತ್ತೆ ಮತ್ತೆ ಕೇಳಬೇಕೆನಿಸಿತು ನಿನ್ನ ಮಾತಿನ ದಾಟಿಯನ್ನು,
ಎಬ್ಬಿಸಿತು ನನ್ನಲೊಂದು ಆಶಾಕಿರಣದ ಅಲೆಯನ್ನು.

ನೀ ಮಾತನಾಡಿದರೆ ಸಾಕೆಂಬ ಭಾವ ಮೂಡಿತು ಮನದಲಿ,
ನೋಡ ನೋಡುತ್ತಲೇ ಕಳೆದೋದೆ ನಿನ್ನ ಗೆಳೆತನದ ಬೆಸುಗೆಯಲಿ ,
ಮಾತು ಬೆಳ್ಳಿ ಮೌನ ಬಂಗಾರವಾಯ್ತು ನನ್ನ ಮಾತು ನಿನ್ನೆದುರಲಿ ,
ಆಧ್ಯೆಗೆ ಬಂಧಿಸಿರುವೆ ನನ್ನ ನೀ ,ನಿನ್ನ ಮಧುರವಾದ ಮಾತಿನಲಿ .

ಮಂಗಳವಾರ, ಡಿಸೆಂಬರ್ 20, 2011

ಕನಸಿನ ಚೆಲುವೆ


ಸಿಹಿಯಾಗಿದೆ ನಿನ್ನ ನೆನಪು ಯಾವಾಗಲು,
ಅನುದಿನವು ಕಾಣುತ್ತಿರುವೆನು ನೀ ಬರುವ ದಾರಿಯನ್ನು,
ಹೇಗೆ ಹೇಳಿಕೊಳ್ಳಲಿ ನನ್ನ ಮನದ ತಳಮಳವನ್ನು,
ಕನಸಲ್ಲು ಕಾಣುತ್ತಿರುವೆ ನಾ ನಿನ್ನ ಮೊಗವನ್ನು.

ಬೇಕೆನಿಸಿದೆ ನನಗೆ ನೀನು ಪ್ರತಿ ಅಣು ಅಣುವು,
ಹೃದಯವೂ ಯಾವಾಗಲು ಬಯಸಿದೆ ನಿನ್ನ ಸನಿಹವನ್ನು,
ನಿನ್ನ ಒಲವನ್ನೇ ಕಾಣುತ್ತಿರುವೆ ಪ್ರತಿ ಕ್ಷಣವೂ,
ಇದೇಕೆ ಹೀಗೆ ಕಾಡುತ್ತಿರುವೆ ನನ್ನ ನೀನು.

ಗುರುವಾರ, ಡಿಸೆಂಬರ್ 15, 2011

ಬಾಲ್ಯದ ನೆನಪು

ಅಮ್ಮ ನಿನ್ನ ಮಡಿಲಲ್ಲಿ ಮತ್ತೊಮ್ಮೆ ಮಗುವಾಗುವಾಸೆ,
ಸಾಕಾಗಿದೆ ಈ ಜಂಜಾಟದ ಬದುಕು ಮತ್ತೊಮ್ಮೆ ನನ್ನ
ಬಾಲ್ಯಕ್ಕೆ ಮರಳುವಾಸೆ,
ನಿಷ್ಕಲ್ಮಶಾವಾದ ಆ ವಯಸ್ಸು,ಯಾರಿಗೂ ನೋಯಿಸದ ಆ ಮನಸ್ಸು
ಮತ್ತೊಮ್ಮೆ ಪಡೆಯುವಾಸೆ
ಮಣ್ಣಿನಲ್ಲಾಡುತ್ತಿದ್ದ ದಿನಗಳು,ಸಮಯಕ್ಕೆ ಬೆಲೆಯೇ ಇಲ್ಲದ
ಆ ಕ್ಷಣಗಳಿಗೆ ಮತ್ತೊಮ್ಮೆ ಹೋಗುವಾಸೆ ,
ನಾಳೆಯ ಚಿಂತೆಯೇ ಇಲ್ಲದೇ,ನಿನ್ನೆಯ ಕೊರಗಿಲ್ಲದೇ ನಲಿಯುತ್ತಿದ್ದ
ದಿನಗಳಿಗೆ ಮತ್ತೊಮ್ಮೆ ಜಿಗಿಯುವಾಸೆ,

ಬುಧವಾರ, ಡಿಸೆಂಬರ್ 14, 2011

ಸರ್ವಜ್ಞನ ವಚನಗಳು


ಕೊಟ್ಟು ಹುಟ್ಟಲಿಲ್ಲ | ಮುಟ್ಟಿ ಪೂಜಿಸಲಿಲ್ಲ
ಸಿಟ್ಟಿನಲಿ ಶಿವನ ಬೈದರೆ – ಶಿವ ತಾನು
ರೊಟ್ಟಿ ಕೊಡುವನೆ ಸರ್ವಜ್ಞ

ಹಸಿವರಿತು ಉಂಬುದು | ಬಿಸಿನೀರ ಕುಡಿವುದು
ಹಸಿವಕ್ಕು ವಿಷಯ ಘನವಕ್ಕು – ವೈದ್ಯಗೆ
ಬೆಸಸ ಬೇಡೆಂದ ಸರ್ವಜ್ಞ

ಲಿಂಗಕೆ ತೋರಿಸುತ | ನುಂಗುವಾತನೆ ಕೇಳು
ಲಿಂಗ ಉಂಬುವುದೆ ? ಪೊಡಮಡು – ತೆಲೊ ಪಾಪಿ
ಜಂಗಮಕೆ ನೀಡು ಸರ್ವಜ್ಞ

ಸರ್ವಜ್ಞನ ವಚನಗಳು

ಬಲ್ಲವರ ಒಡನಾಡೆ | ಬೆಲ್ಲವನು ಸವಿದಂತೆ
ಅಲ್ಲದಜ್ಞಾನಿಯೊಡನಾಡೆ – ಮೊಳಕೈಗೆ
ಕಲ್ಲು ಹೊಡೆದಂತೆ ಸರ್ವಜ್ಞ
...
ಬಂದುದನೆ ತಾ ಹಾಸಿ | ಬಂದುದನೆ ತಾ ಹೊದೆದು
ಬಂದುದನೆ ಮೆಟ್ಟಿ ನಿಂತರೆ – ವಿಧಿ ಬಂದು
ಮುಂದೇನ ಮಾಳ್ಕು ಸರ್ವಜ್ಞ

ಸಿರಿ ಬಂದ ಕಾಲದಲಿ | ಕರೆದು ದಾನವ ಮಾಡು
ಪರಿಣಾಮವಕ್ಕು ಪದವಕ್ಕು – ಕೈಲಾಸ
ನೆರೆಮನೆಯಕ್ಕು ಸರ್ವಜ್ಞ

ಸೋಮವಾರ, ಡಿಸೆಂಬರ್ 12, 2011

ಚಂದ್ರ ಗ್ರಹಣ (Lunar eclipse)

ಮೊನ್ನೆ ಅಂದ್ರೆ (೧೦-೧೨-೨೦೨೨) ಜಗತ್ತಿನಾದ್ಯಂತ ಚಂದ್ರ ಗ್ರಹಣ ಇತ್ತು . ಇದನ್ನ ಸಾವಿರಾರು ಜನ ನೋಡಿ ಕಣ್ಣ ತುಮ್ಬಿಸ್ಕೊಂದ್ರು ಸಹ .ಇದರಲ್ಲಿ ನಾನು ಒಬ್ಬ ಮತ್ತು ನನ್ನ  ಕೆಲವು ಸ್ನೇಹಿತರು ಸಹ .ನಾನು ಏನ್ ಬರಿಲಿ ಅಂತ ಯೋಚನೆ ಮಾಡ್ತಾ ಇದ್ದೆ ಅವಾಗ ಈ ಟಾಪಿಕ್ ಸಿಕ್ತು ಹಾಗೆ ಬರ್ದಿದೀನಿ just enjoy it :)

ಹಾಗಾದ್ರೆ ಚಂದ್ರ ಗ್ರಹಣ ಅಂದ್ರೆ ಏನು ?ನಾನು ಇದರ ಬಗ್ಗೆ ಒಂದು ಸಣ್ಣ ಟಿಪ್ಪಣಿ ಕೊಡ್ತೀನಿ. ಚಂದ್ರ ಗ್ರಹಣ ಅಂದ್ರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಸೂರ್ಯನ ಕಿರಣಗಳು ಚಂದ್ರನ ಮೇಲೆ ಬಿಳದಂತೆ ಭೂಮಿ ತಡೆಯುತ್ತೆ ಆ ಸಂಧರ್ಬದಲ್ಲಿ ಚಂದ್ರನ ಮೆಲ್ಮಾಯಲ್ಲ ಸ್ವಲ್ಪ ಕಪ್ಪದಂತೆ ಕಾಣುತ್ತೆ . It occurs only when sun ,earth,moon aligned exactly .ಅದು ಕೂಡ ಹುಣ್ಣಿಮೆಯ ದಿನ ಇದು ನಡೆಯುತ್ತೆ .

ಶನಿವಾರ, ಡಿಸೆಂಬರ್ 10, 2011

ಮನಸಿನ ಮಾತು

ಇಳೆಯ ಮೇಲೆ ಪ್ರೀತಿಯ ಮಳೆಯ ಚುಂಬನ ,
ಹೂವಿನ ಮೇಲೆ ಮಂಜಿನ ಹನಿಗಳ ಸಿಂಚನ,
ತರುಗಳ ಮೇಲೆ ಲತೆ ಬಳ್ಳಿಗಳ ಬಂಧನ ,
ನನ್ನ ಮನಸಿನೊಳಗೆ ನಿನ್ನ ಒಲವಿನ ಸಂಚಲನ .

ನದಿ ತೊರೆಗಳಿಗೆ ಸಾಗರ ಸೇರುವ ಬಯಕೆ ,
ಹೂ-ದುಂಬಿಗಳಿಗೆ ನೇಸರನ ನೋಡುವ ಬಯಕೆ ,
ದಿನ ಬೆಳಗ್ಗೆ ಭಾಸ್ಕರನಿಗೆ ಭೂರಮೆಯ ನೋಡುವ ಬಯಕೆ ,
ನನಗೆ ನಿನ್ನ ಒಲವ ಪಡೆವ ಬಯಕೆ .

ಶುಕ್ರವಾರ, ಡಿಸೆಂಬರ್ 9, 2011

What is life(ಜೀವನ ಅಂದ್ರೆ ಏನು )

ಜೀವನ ಅಂದ್ರೆ ಏನು ? ಮೂರು ಅಕ್ಷರದಿಂದ ಕೂಡಿದ ಒಂದು ಪದ ಮಾತ್ರ ನಾ...ಅಲ್ಲ .... ನಿಜ ಹೇಳ್ಬೇಕು ಅಂದ್ರೆ ಜೀವನ ಅಂದ್ರೆ ಏನು ಅಂತ ನನಗೂ ಇನ್ನು
ಗೊತ್ತಿಲ್ಲ ಅದೇನೋ ಹೇಳ್ತಾರಲ್ಲ 'Life is like a ocean ,  no one knows where they ll reach at the end' ಎಷ್ಟು ನಿಜ ಅಲ್ವಾ..... ಅವರವರ ಮನದಂತೆ ಅವರವರ ಕಲ್ಪನೆ.
ಜೀವನ ಅಂದ್ರೆ ಏನು ಅಂತ ಗೊತ್ತಾಗಿದ್ದೆ ಬೆಂಗಳೂರಿಗೆ ಕಾಲಿಟ್ಟ ಮೇಲೆ. ನಾನು ಬೆಂಗಳೂರಿಗೆ ಕಾಲಿಟ್ಟ ಘಳಿಗೆನೆ ಚೆನ್ನಾಗಿರಲಿಲ್ಲ ಕಣ್ರೀ.ಏಕೆಂದರೆ software ಅನ್ನೋ ದೇವತೆ ಫುಲ್ ಮುನಿಸಿಕೊಂಡು ಬಿಟ್ಟಿದ್ಲು ಕಣ್ರೀ . ಅದ್ರು ನಾನ್ ಬಿಡ್ತೀನಾ... ಆಗಿನ ನನ್ನ ಉತ್ಸಾಹ ಹೇಗೆ ಹೇಳಲಿ ನಿಮಗೆ. ಕಣ್ಣಲ್ಲಿ ನೂರಾರು ಕನಸುಗಳನ್ನು ಹೊತ್ತುಕೊಂಡು ಸಿಲಿಕಾನ್ ಸಿಟಿಗೆ ಕನಸನ್ನು ನನಸು ಮಾಡೋ ಆಸೆ ಇಂದ ಬಂದಿದ್ದೆ .
ಕೆಲಸ ಹುಡಕಬೇಕು, ಹಣ ಸಂಪಾದಿಸಬೇಕು ಅನ್ನೋ ಉತ್ಸಾಹ ಎಲ್ಲರಲ್ಲೂ ಸಹಜನೆ....ಅದು ನನ್ನಲ್ಲೂ ಇತ್ತು...ಆದ್ರೆ ನನ್ನ ಪ್ರಶ್ನೆ ಏನು ಅಂದ್ರೆ... B.E ಮುಗಿದ ಮೇಲೆ ಕೆಲಸ ಸಿಕ್ ಬಿಡುತ್ತ? ಬೆಂಗಳೂರಿನಲ್ಲಿ ಕೆಲಸ ಸಿಗೋದು ಅಂದ್ರೆ ಬಾಳೆ ಹಣ್ಣು ಸಿಪ್ಪೆ ತೆಗೆದು ತಿಂದಷ್ಟು ಸುಲಭ ಅಂದ್ಕೊಂಡ್ರ?

ಬುಧವಾರ, ಡಿಸೆಂಬರ್ 7, 2011

IT lifuuuu.....Ishtenaaa......

hmmm ಏನು ಮಾಡಲಿ , ಏನು ಬರಿಲಿ ಅಂತ ಯೋಚನೆ ಮಾಡ್ತಾ ಇರ್ಬೇಕಾದ್ರೆ ನನ್ನ ಮನಸ್ಸಿಗೆ ತೋಚಿದನ್ನ ಸುಮ್ಮನೆ ಬರಿತ ಹೋಗಿದೀನಿ .Hope you like.:)

IT ಇದು ನನ್ನ ಎರಡು ವರ್ಷದ ಅನುಭವದ ಪ್ರಕಾರ ಒಂದು ದೊಡ್ಡ ಸಮುದ್ರ ಇದ್ದ ಹಾಗೇ. ಎಷ್ಟೇ ಈಜಿದರು ದಡ ಸೇರೋಲ್ಲ ಅಂತಾರಲ್ಲ ಹಾಗೇ . ಆದರೆ ಇದರಲ್ಲೂ ಈಜಿ ಸಾಧನೆ ಮಾಡಿರೋರು ತುಂಬಾ ಜನಾನೇ ಇದಾರೆ .ಸಮುದ್ರ ಏಕೆ ಅಂದ್ರೆ ನಾನಿಲ್ಲಿ ಹಲವಾರು ಹೊಸ ವಿಷಯಗಳನ್ನ ಕಲಿತ ಇದೀನಿ .ಆದ್ರೆ ನಾನು ಹಿಂತುರುಗಿ ನೋಡಿದರೆ ಅದೆಲ್ಲ ಹಳೆಯದಾಗಿ ಏನು ಕಲ್ತೆ ಇಲ್ಲ ಅನ್ಸುತ್ತೆ. ಇದು ನನ್ನ ಅನುಭವ .ಬೇರೆಯವರು ಹೇಗೋ ನಂಗೊತ್ತಿಲ್ಲ .

ಹೆಣ್ಣಿವಳು

ಹೆಣ್ಣಿವಳು ಭುವಿಯಲ್ಲಿ ಒಂದು ಹೂವಿನಂತೆ..
ಸೂರ್ಯ ಇವಳ ತಂದೆ, ದುಂಬಿ ಇವಳ ಗಂಡನಂತೆ..
ಸೂರ್ಯನಿರದೆ ಇವಳು ಬದುಕುಲಿಯಲಾರಳು
ದುಂಬಿಯದು ಸ್ಪರ್ಶಿಸದೆ, ಇವಳು ನಗುತಿರಲಾರಳು
ನಗುತಿರೆ ಹು ಒಂದು, ನೋಡಲೆಷ್ಟು ಸುಂದರ...
ನಗುತಿರೆ ನೀ ಹೆಣ್ಣೇ, ಇ ಲೋಕವೇ ದೇವ ಮಂದಿರ.
ಹೆಣ್ಣು ಸಂಸಾರದ ಕಣ್ಣು ಎಷ್ಟೊಂದು ಸರಳ ,ಸುಂದರ .
           **ಸಚ್ಚಿ **

ಮುಂಜಾನೆ

ಶಶಿ ತಾರೆಯು ಸರಿದಿವೆ ಬಿಳಿ ಮೋಡದ ತೆರೆಗೆ ,
ರಾತ್ರಿ ಮತ್ತೆ ಬರುವೆನೆಂದು ಹೇಳಲೋರತ್ಹಿವೆ ನಮಗೆ ,
ನಿಶಾಚರಿಗಲೆಲ್ಲವು ಅಡಗುತ್ತಿವೆ ತಮ್ಮ ಬಿಲದ ಒಳಗೆ,
ಇದೆಲ್ಲ ಆಗುತ್ತಿರುವುದು ಮುಂಜಾನೆಯ ಸಣ್ಣ ಸುಳಿಗೆ.

ಆಕಾಶದಿ ಉದಯಿಸುತ್ತಿದೆ ಆ ಸುಂದರ ತಾರೆ ,
ಪುಷ್ಪ್ಪಗಳ ಸ್ಪರ್ಶಿಸಲು ಕಾಯುತ್ತಿವೆ ದುಂಬಿಗಳ ಸಾಲೆ ,
ಹಕ್ಕಿಗಳು ಹಾರುತ್ತಿವೆ ಗಿರಿ ತೊರೆಗಳ ಮೇಲೆ, 
 ಬಂನಿಸಲಗುವುದೇ ಆ ದೇವ ಮಾಡಿರುವ ಮುಂಜಾನೆಯ ಆ ಲೀಲೆ .

ಆಶಾವಾದಿ...

ಒಲವೆಂಬ ಸುಧೆಯಲ್ಲಿ ಬಿದ್ದ ದುಂಬಿಯಂತೆ ,
ಅತ್ತ ತೇಲಲು ಆಗದೆ ಇತ್ತ ಮುಳುಗಲು ಆಗದೆ
ತವಕ ಪಡುತ್ತಿರುವ ನಾ ನೊಬ್ಬ ಭಗ್ನಪ್ರೇಮಿ ...:-(

ಕಾಯುತ್ತಿರುವೆ ನಾನು ನನ್ನ ಮುಂದಿನ ಸುದಿನಗಳತ್ತ,
ಹಳೆಯ ನೆನಪುಗಳನ್ನೆಲ್ಲ ಮರೆಯುತ ,
ಹೊಸ ಕನಸುಗಳಿಗಾಗಿ ಹಾತೊರೆಯುತ್ತಿರುವ
ನಾ ನೊಬ್ಬ ಆಶಾವಾದಿ...

ಗೆಳತಿ

ನೀನಿರುವೆ ಮನದಲಿ ಹೂವಿನಲ್ಲಿರುವ ಮಧುವಂತೆ ,
ನೀನಿರುವೆ ನನ್ನಲಿ ನನ್ನ ಹೃದಯ ಬಡಿತದಂತೆ ,
ನೀನಿರದ ಸಮಯಕೆ ಕಣ್ಣ ಹನಿಗಳೇ ಸಾಕ್ಷಿ ,
ನೀನಿರದ ಬದುಕಿಗೆ ನನ್ನ ಮರಣವೇ ಸಾಕ್ಷಿ.

ಹೊಮ್ಬಿಸಿಲಿನೋಳು ಮೂಡಿದ
ಬಿಸಿ ಸಂಚಿನ ಕಿರಣಗಳಂತೆ ,
ಭೂ ತಾಯಿಯ ಬಿಸಿಯ ತಣಿಸಲು
ಬೀಳುವ ಮಳೆಯ ಸಿಂಚನದಂತೆ ,
ನೀ ಬಂದೆ ನನ್ನ ಬಾಳಲಿ ,
 ಕತ್ತಲೆಯಲಿ ಕಾಣುವ ಮಿಂಚಿನ ಹುಳದಂತೆ .

ನನ್ನ ಕವನ


             
ನೂರಾರು ಕನಸನ್ನು ನನ್ನ ಮನದಲ್ಲಿ ಬಿತ್ತಿ,
ನೂರಾರು ಆಸೆಯನ್ನು ನನ್ನ ಹೃದಯದಲ್ಲಿ ಕೆತ್ತಿ,
ನನಗೂ ತಿಳಿಯದಂತೆ ನನ್ನ ಹೃದಯ 
ಕದ್ದ ಆ ಚೋರಿ  ಯಾರು..

 ಅಲ್ಲೆಲ್ಲೋ ನಿಂತು ಕಾಡುತ್ತಿರುವೆ ಏಕೆ ,
ನಿನಗಾಗಿ ಕಾದಿದೆ ಈ ಪ್ರೀತಿಯ ಬಯಕೆ,
ಎಲ್ಲಿರುವೆ ಬಾರೆ ಬೇಗ ನನ್ನ ಸನಿಹಕೆ ,
ಆಗ ನನ್ನ ಮನ ಹೋಗುವುದು ಸ್ವರ್ಗದ ಉತ್ಸವಕೆ 
Pages (5)12345 Next
Related Posts Plugin for WordPress, Blogger...