ಸೋಮವಾರ, ಮಾರ್ಚ್ 5, 2012

ಎಚ್ಚರ

ಮನದ ಹಿಂದಿರುವ ಮಾತನ್ನು ನೀ ಹೇಗೆ ತಿಳಿಯುವೆ ,
ನಗೆಯ ಹಿಂದಿನ ಅಳುವನ್ನು ನೀ ಹೇಗೆ ಅರಿಯುವೆ ,
ನನ್ನೆದೆಯ ಒಳಗಿನ ತಳಮಳ ನೀ ಹೇಗೆ ಸವಿಯುವೆ ,
ಈ ತರದ ವೇದನೆಯ ಉಣಿಸಬೇಡ ನನ್ನೆದೆಯಲ್ಲಿ ,
ನನ್ನಿರುವೆಕೆಯೇ ನಿನಗೆ ಭಾರವಾದಿತು ಎಚ್ಚರ !

ಕರಿಮುಗಿಲಂತೆ ನೋವುಗಳೇ ನನ್ನೆದೆಯಲಿ ಅಡಗಿರುವುದು,
ಮಳೆಯೆಂಬ ಅಳು ಬರದೇ ಮನಸ್ಸು ತುಂಬಾ ಭಾರವಾಗಿದೆ ,
ನನ್ನೆದೆಯ ನೋವಿನ ಕೊಳವು ಎಂದೋ ತುಂಬಾಗಿದೆ,
ಸಣ್ಣ ಹೂ ಎಸೆದರು ನೋವು ತುಳುಕಿತು ಎಚ್ಚರ !

ಕನಸಿನ ತೆರೆಯನ್ನು ಸರಿಸಿ ,ವಾಸ್ತವ ಸ್ಥಿತಿಯ ನೀನೊಮ್ಮೆ ನೋಡು ,
ನಿನಗಾಗಿ ನಾನಿಂದು ಕಂಬನಿಯ ಮಿಡಿಯುತ್ತಿರುವೆ ,
ನನ್ನ ನೋವಿನ ಹಿಂದಿನ ಕಥೆಯ ತಿಳಿಯದೆ ನೀ ಸುಖವಾಗಿರು ,
ನನ್ನ ನೋವು ತಿಳಿಯಲು ಹೋಗಿ ನಿನ್ನ ನೋವೆ ಹೆಚ್ಚಾದಿತು ಎಚ್ಚರ !

ಬುಧವಾರ, ಜನವರಿ 25, 2012

ಗೆಳತಿ


ಮನಸ್ಸೆಂಬ ಕತ್ತಲೆಯ ನಭದಲಿ  
ಚಂದ್ರನಂತೆ ಬಂದು ನಿಂತೆ ನೀನು, 
ಮೋಡದಂತಹ ಪ್ರೀತಿಯನ್ನು ಕರಗಿಸಿ 
ಮಳೆಹನಿಯಾಗಿ ಸುರಿದೆ ನನ್ನ ಬಾಳಲಿ ನೀನು, 
ಸೋಲೆಂಬ ನನ್ನ ಬಾಳಿನ ಬಳ್ಳಿಗೆ 
ಆಸರೆಯ ಮರವಾದೆ ನೀನು, 
ಕಷ್ಟಗಳೆ ತುಂಬಿದ ನನ್ನ ಬಾಳೆಂಬ ದುಂಬಿಗೆ 
ಸಿಹಿಯಾದ ಮಧು ಕೊಡುವ ಹೂವದೆ ನೀನು , 
Related Posts Plugin for WordPress, Blogger...