ಶುಕ್ರವಾರ, ಡಿಸೆಂಬರ್ 30, 2011

Worth spending some time to read this...

Friends I Just got this article as a fwd mail.Really touching story .:( So posted here.Must read it.


ಬೆಂಗಳೂರಿನಲ್ಲಿ ಇರುವ ಜನಕ್ಕೆ ಕತ್ರಿಗುಪ್ಪೆ ಚೆನ್ನಾಗಿ ಗೊತ್ತು. ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ ಇಳಿದು, ಫುಡ್‌ವರ್ಲ್ಡ್ ದಾಟಿದ್ರೆ ಸಿಗೋದೇ ಅನ್ನ ಕುಟೀರ ಹೋಟೆಲು. ಅದರ ಎದುರಿಗೆ ಬಿಗ್‌ಬಜಾರ್. ಅದೇ ರಸ್ತೇಲಿ ಮುಂದೆ ಹೋಗಿ ಮೊದಲು ಎಡಕ್ಕೆ ತಿರುಗಬೇಕು. ಹಾಗೇ ಐದು ನಿಮಿಷ ನಡೆದರೆ ಎರಡು ಸಂಪಿಗೆ ಮರಗಳು ಸಿಗುತ್ತವೆ. ಆ ಮರದ ಎದುರಿಗಿರೋದೇ ಹರೀಶ-ಭಾರತಿ ದಂಪತಿಯ ಮನೆ. ಡಬಲ್ ಬೆಡ್‌ರೂಂನ ಆ ಮನೆಗೆ ಎರಡು ಲಕ್ಷ ಅಡ್ವಾನ್ಸ್. ಎಂಟು ಸಾವಿರ ಬಾಡಿಗೆ.

ಭಾರತಿ-ಹರೀಶ್ ದಂಪತಿಗೆ ಒಂದು ಮುದ್ದಾದ ಮಗುವಿದೆ. ಅದರ ಹೆಸರು ಸ್ನೇಹಾ. ಹರೀಶನಿಗೆ ಒಂದು ಎಂಎನ್‌ಸಿಯಲ್ಲಿ ಕೆಲಸವಿದೆ. ಎಂಎನ್‌ಸಿ ಕೆಲಸ ಅಂದ ಮೇಲೆ ಹೇಳೋದೇನಿದೆ
? ಆ ನೌಕರಿಯಲ್ಲಿ ಒಳ್ಳೆಯ ಸಂಬಳವೇನೋ ಇದೆ ನಿಜ. ಆದರೆ ಆ ದುಡಿಮೆಗೆ ಹೊತ್ತು-ಗೊತ್ತು ಎಂಬುದೇ ಇಲ್ಲ. ಶಿಫ್ಟ್ ಲಿಸ್ಟಿನ ಪ್ರಕಾರ ಬೆಳಗ್ಗೆ 11ರಿಂದ ಸಂಜೆ ಆರೂವರೆಯವರೆಗೂ ಕೆಲಸ ಅಂತ ಇದೆ ನಿಜ. ಆದರೆ ಹೆಚ್ಚಿನ ದಿನಗಳಲ್ಲಿ ಕೆಲಸ ಮುಗಿಯೋವಷ್ಟರಲ್ಲಿ ರಾತ್ರಿ ಎಂಟು ಗಂಟೆ ದಾಟಿರುತ್ತೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಆಫೀಸಿಂದ ಹೊರಟು ಹರೀಶ ಕತ್ರಿಗುಪ್ಪೆಯ ಮನೆ ತಲುಪಿಕೊಳ್ಳುವುದರೊಳಗೆ ರಾತ್ರಿ ಒಂಭತ್ತೂವರೆ ಆಗಿಬಿಡುತ್ತಿತ್ತು. ಶನಿವಾರ-ಭಾನುವಾರಗಳಂದು ಆಫೀಸಿನ ಗೆಳೆಯರೊಂದಿಗೆ ವೀಕೆಂಡ್ ಪಾರ್ಟಿಗೆಂದು ಆತ ಹಾರಿಬಿಡುತ್ತಿದ್ದ. ಆ ಎರಡು ದಿನಗಳಲ್ಲಿ ಆತ ಮನೆ ತಲುಪುತ್ತಿದ್ದುದು ರಾತ್ರಿ ಹನ್ನೊಂದು, ಹನ್ನೊಂದೂವರೆಗೆ!

ಬೆಳಗ್ಗೆ ಒಂಭತ್ತು ಗಂಟೆಗೆಲ್ಲ ಗಂಡ-ಮಗಳು ಮನೆಯಿಂದ ಹೊರಟುಬಿಡುತ್ತಿದ್ದರು. ಆನಂತರ ಇಡೀ ದಿನ ಮನೇಲಿ ನಾನೊಬ್ಬಳೇ ಎನ್ನಿಸಿದಾಗ ಭಾರತಿಗೆ ಬೋರ್ ಎನ್ನಿಸತೊಡಗಿತು. ಅವಳಾದರೂ ಇಂಗ್ಲಿಷಿನಲ್ಲಿ ಎಂ.ಎ. ಮಾಡಿಕೊಂಡಿದ್ದವಳು. ಇಡೀ ದಿನ ಮನೇಲಿರುವ ಬದಲು ಯಾವುದಾದರೂ ಸ್ಕೂಲ್‌ನಲ್ಲಿ ಟೀಚರ್ ಆಗಿ ಸೇರಬಾರದೇಕೆ ಅಂದುಕೊಂಡಳು. ಅವಳ ಅದೃಷ್ಟಕ್ಕೆ
, ಅದೇ ವೇಳೆಗೆ ಸ್ನೇಹಾ ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕಿಯರ ಕೊರತೆ ಇದೆ ಎಂಬ ವಿಷಯವೂ ಗೊತ್ತಾಯಿತು. ಒಮ್ಮೆ ಪ್ರಯತ್ನಿಸಿ ನೋಡೋಣ. ಕೆಲಸ ಸಿಕ್ಕಿಬಿಟ್ಟರೆ ಹೋಗೋದು. ಇಲ್ಲವಾದರೆ, ಒಂದು ಸಂದರ್ಶನ ಎದುರಿಸಿದ ಅನುಭವವಂತೂ ಆಗುತ್ತದೆ ಎಂದುಕೊಂಡು ಅರ್ಜಿ ಹಾಕಿಯೇಬಿಟ್ಟಳು ಭಾರತಿ. ಹದಿನೈದೇ ದಿನಗಳಲ್ಲಿ ಆ ಕಡೆಯಿಂದ ಉತ್ತರ ಬಂತು : `ಸಹ ಶಿಕ್ಷಕಿಯಾಗಿ ನಿಮ್ಮನ್ನು ನೌಕರಿಗೆ ತೆಗೆದುಕೊಳ್ಳಲಾಗಿದೆ. ಅಭಿನಂದನೆ...'

ಹೆಂಡತಿ ಕೆಲಸಕ್ಕೆ ಹೊರಟು ನಿಂತಾಗ ಹರೀಶ ಎಗರಾಡಿದ. ತಕ್ಷಣವೇ ಭಾರತಿ ಹೇಳಿದಳು :
`ಯೋಚನೆ ಮಾಡಿ ಹರೀ. ಬೆಳಗ್ಗಿಂದ ಸಂಜೆಯ ತನಕ ಮನೇಲಿ ನಾನೊಬ್ಳೇ ಇರಬೇಕು. ಅದರ ಬದಲು ಟೀಚರ್ ಆಗಿ ಕೆಲಸ ಮಾಡಿದ್ರೆ ತಪ್ಪೇನು? ನಾನು ಹೋಗ್ತಿರೋದು ಮಗು ಓದ್ತಾ ಇರೋ ಸ್ಕೂಲೇ ತಾನೆ? ಇದರಿಂದ ಅವಳಿಗೂ ಒಂದು ಕಂಫರ್ಟ್ ಸಿಕ್ಕ ಹಾಗಾಯ್ತು. ಇನ್ನು ಮುಂದೆ ಪ್ರತಿ ತಿಂಗಳೂ ನಾನೂ ಒಂದಿಷ್ಟು ದುಡ್ಡು ಉಳಿಸ್ತೀನಿ. ಒಂದೈದು ವರ್ಷ ನಾವಿಬ್ರೂ ಕಷ್ಟಪಟ್ಟು ಎಷ್ಟು ಸಾಧ್ಯವೋ ಅಷ್ಟು ಉಳಿಸೋಣ. ಎಲ್ಲವನ್ನೂ ಮರೆತು ದುಡಿಯೋಣ. ಹಾಗೆ ಮಾಡಿದ್ರೆ ಆರನೇ ವರ್ಷದ ಹೊತ್ತಿಗೆ ನಾವೂ ಒಂದು ಸ್ವಂತ ಮನೆ ಮಾಡ್ಕೋಬಹುದೋ ಏನೋ...

ಶನಿವಾರ, ಡಿಸೆಂಬರ್ 24, 2011

ಗೆಳೆತನ


ಮೊದಮೊದಲು ಕೇಳಿದ ಆ ದ್ವನಿಯು ಮೀಟೀತು ನನ್ನೆದೆಯಲಿ ,
ಸಹಜವಾಗೇ ಸ್ಪಂದಿಸಿತು ನನ್ನೀ ಮನಸ್ಸು ನಿನ್ನೆಡೆಯಲಿ,
ಮತ್ತೆ ಮತ್ತೆ ಕೇಳಬೇಕೆನಿಸಿತು ನಿನ್ನ ಮಾತಿನ ದಾಟಿಯನ್ನು,
ಎಬ್ಬಿಸಿತು ನನ್ನಲೊಂದು ಆಶಾಕಿರಣದ ಅಲೆಯನ್ನು.

ನೀ ಮಾತನಾಡಿದರೆ ಸಾಕೆಂಬ ಭಾವ ಮೂಡಿತು ಮನದಲಿ,
ನೋಡ ನೋಡುತ್ತಲೇ ಕಳೆದೋದೆ ನಿನ್ನ ಗೆಳೆತನದ ಬೆಸುಗೆಯಲಿ ,
ಮಾತು ಬೆಳ್ಳಿ ಮೌನ ಬಂಗಾರವಾಯ್ತು ನನ್ನ ಮಾತು ನಿನ್ನೆದುರಲಿ ,
ಆಧ್ಯೆಗೆ ಬಂಧಿಸಿರುವೆ ನನ್ನ ನೀ ,ನಿನ್ನ ಮಧುರವಾದ ಮಾತಿನಲಿ .

ಮಂಗಳವಾರ, ಡಿಸೆಂಬರ್ 20, 2011

ಕನಸಿನ ಚೆಲುವೆ


ಸಿಹಿಯಾಗಿದೆ ನಿನ್ನ ನೆನಪು ಯಾವಾಗಲು,
ಅನುದಿನವು ಕಾಣುತ್ತಿರುವೆನು ನೀ ಬರುವ ದಾರಿಯನ್ನು,
ಹೇಗೆ ಹೇಳಿಕೊಳ್ಳಲಿ ನನ್ನ ಮನದ ತಳಮಳವನ್ನು,
ಕನಸಲ್ಲು ಕಾಣುತ್ತಿರುವೆ ನಾ ನಿನ್ನ ಮೊಗವನ್ನು.

ಬೇಕೆನಿಸಿದೆ ನನಗೆ ನೀನು ಪ್ರತಿ ಅಣು ಅಣುವು,
ಹೃದಯವೂ ಯಾವಾಗಲು ಬಯಸಿದೆ ನಿನ್ನ ಸನಿಹವನ್ನು,
ನಿನ್ನ ಒಲವನ್ನೇ ಕಾಣುತ್ತಿರುವೆ ಪ್ರತಿ ಕ್ಷಣವೂ,
ಇದೇಕೆ ಹೀಗೆ ಕಾಡುತ್ತಿರುವೆ ನನ್ನ ನೀನು.

ಗುರುವಾರ, ಡಿಸೆಂಬರ್ 15, 2011

ಬಾಲ್ಯದ ನೆನಪು

ಅಮ್ಮ ನಿನ್ನ ಮಡಿಲಲ್ಲಿ ಮತ್ತೊಮ್ಮೆ ಮಗುವಾಗುವಾಸೆ,
ಸಾಕಾಗಿದೆ ಈ ಜಂಜಾಟದ ಬದುಕು ಮತ್ತೊಮ್ಮೆ ನನ್ನ
ಬಾಲ್ಯಕ್ಕೆ ಮರಳುವಾಸೆ,
ನಿಷ್ಕಲ್ಮಶಾವಾದ ಆ ವಯಸ್ಸು,ಯಾರಿಗೂ ನೋಯಿಸದ ಆ ಮನಸ್ಸು
ಮತ್ತೊಮ್ಮೆ ಪಡೆಯುವಾಸೆ
ಮಣ್ಣಿನಲ್ಲಾಡುತ್ತಿದ್ದ ದಿನಗಳು,ಸಮಯಕ್ಕೆ ಬೆಲೆಯೇ ಇಲ್ಲದ
ಆ ಕ್ಷಣಗಳಿಗೆ ಮತ್ತೊಮ್ಮೆ ಹೋಗುವಾಸೆ ,
ನಾಳೆಯ ಚಿಂತೆಯೇ ಇಲ್ಲದೇ,ನಿನ್ನೆಯ ಕೊರಗಿಲ್ಲದೇ ನಲಿಯುತ್ತಿದ್ದ
ದಿನಗಳಿಗೆ ಮತ್ತೊಮ್ಮೆ ಜಿಗಿಯುವಾಸೆ,
Related Posts Plugin for WordPress, Blogger...